ದಿನಾಂಕ:12.10.2017 ನೇ ಗುರುವಾರ ರಂದು ನಾಡೋಜ ಡಾ|| ಪಾಟೀಲ ಪುಟ್ಟಪ್ಪ ಸಭಾ ಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಹಾನಗರ ಪಾಲಿಕೆ ಕಛೇರಿ ಎದುರುಗಡೆ, ಧಾರವಾಡ ಇಲ್ಲಿ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಶ್ರೀ ಶಿವಾನಂದ ಅಂಬಡಗಟ್ಟಿ, ಮಾಜಿ ಶಾಸಕರು, ಧಾರವಾಡ ರವರು ಕಾರ್ಯಾಗಾರದ ಉದ್ಘಾಟನೆ ಮಾಡಿ ತರಬೇತಿಯ ಅಗತ್ಯತೆಯನ್ನು ಹಾಜರಿದ್ದ ಪದಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟರರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಉಪಾಧ್ಯಕ್ಷರಾದ ಡಾ|| ಸಂಜಯ್ ಪಿ. ಹೊಸಮಠ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ನಿರ್ದೇಶಕರುಗಳಾದ ಶ್ರೀ ಗುರುರಾಜ್ ಹುಣಸಿಮರದ, ಶ್ರೀ ಎಂ.ಜೆ. ನರೇಂದ್ರಕುಮಾರ, ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ಮತ್ತು ಶ್ರಿ ಧರೇಪ್ಪ ಎಂ. ಅಲಗೂರ, ರವರು ಭಾಗವಹಿಸಿದರು ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ಗುರು ತಿಗಡಿ, ನಿರ್ದೇಶಕರು, ಧಾರವಾಡ ತಾಲೂಕಾ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರ ಸಂಘ ನಿ., ಹಾಗೂ ಶ್ರೀಮತಿ ಸಂದ್ಯಾ ಸಿ.ಟಿ, ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಾಂಧಿನಗರ ಶಾಖೆ, ಧಾರವಾಡ ಭಾಗವಹಿಸಿದ್ದರು, ನಿರ್ದೇಶಕರಾದ ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ರವರು ಗಣ್ಯರನ್ನು ಸ್ವಾಗತಿಸಿದರು ಶ್ರೀ ಗುರು ತಿಗಡಿ ರವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನೆ ಸಲ್ಲಿಸಿದರು.
ಈ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಬಿ.ವಿ ರವೀಂದ್ರನಾಥ., ಸನ್ನದು ಲೆಕ್ಕಪರಿಶೋಧಕರು, ಸಾಗರ ಇವರು “ಆದಾಯ ತೆರಿಗೆ ಮತ್ತು ಸರಕು ಸೇವಾ ತೆರಿಗೆಯ (ಜಿ.ಎಸ್.ಟಿ) ಪ್ರಮುಖ ಅಂಶಗಳ” ಕುರಿತು ಉಪನ್ಯಾಸ ನೀಡಿದರು ಮಧ್ಯಾಹ್ನದ ಅವದಿಯಲ್ಲಿ ಇ-ಸ್ಟಾಂಪಿಂಗ್ ತಜ್ಞರಿಂದ “ಇ-ಸ್ಟಾಂಪಿಂಗ್ ಕುರಿತು ತರಬೇತಿ” ಹಾಗೂ ಶ್ರೀ ಸುರೇಶ್ ಗಂಗಾಧರರಾವ್ ಜೋಷಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿವೃತ್ತ) ಇವರಿಂದ “ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳಲ್ಲಿನ ಇತ್ತೀಚಿನ ತಿದ್ದುಪಡಿಗಳು ಮತ್ತು ದ್ರವ್ಯ ಆಸ್ತಿ ನಿರ್ವಹಣೆ” ಕುರಿತು ಉಪನ್ಯಾಸ ನೀಡಿದರು.
ಸದರಿ ಕಾರ್ಯಾಗಾರಕ್ಕೆ ಮಹಾಮಂಡಳದಲ್ಲಿ ಸದಸ್ಯತ್ವ ಪಡೆದಿರುವ 168 ಪ್ರತಿನಿಧಿಗಳು ನೋಂದಣಿಯಾಗದಿರುವ ಸಂಘಗಳಿಂದ 142 ಪ್ರತಿನಿಧಿಗಳು ಸೇರಿ ಈ ಕಾರ್ಯಾಗಾರದಲ್ಲಿ ಅಂದಾಜು 310 ಪ್ರತಿನಿಧಿಗಳು ಹಾಜರಿದ್ದು. ಹಾಜರಿದ್ದ ಎಲ್ಲಾ ಪ್ರತಿನಿಧಿಗಳಿಗೆ ಮಹಾಮಂಡಳದ ವತಿಯಿಂದ ತರಬೇತಿ ಕಿಟ್ಟನ್ನು ನೀಡಲಾಯಿತು. ಒಟ್ಟಾರೆ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ತರಬೇತಿ ಕಾರ್ಯಾಗಾರದ ಬಗ್ಗೆ ಭಾಗವಹಿಸಿದ್ದ ಪ್ರತಿನಿಧಿಗಳು ಮೆಚ್ಚಿಗೆ ವ್ಯಕ್ತಪಡಿಸಿದರು.