+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಮಹಾಮಂಡಳದಿಂದ ಹಾವೇರಿ ಮತ್ತು ಧಾರವಾಡದಲ್ಲಿ ಆದಾಯ ತೆರಿಗೆ ರದ್ದತಿಕೋರಿ – ಮನವಿ ಸಲ್ಲಿಕೆ ಹಾಗೂ ಪ್ರತಿಭಟನೆ

ಸಹಕಾರಿ ಸಂಸ್ಥೆಗಳ ಏಳಿಗೆಗೆ ಮಾರಕವಾಗಿರುವ ಆದಾಯ ತೆರಿಗೆ ನೀತಿ ವಿರುದ್ದ ಹಾವೇರಿಯಲ್ಲಿ ಪ್ರತಿಭಟನೆ – ವಿನಾಯತಿಗೆ ಮನವಿ ಸಲ್ಲಿಕೆ

ಹಾವೇರಿ: ದಿನಾಂಕ: 09-01-2020ರಂದು ಹಾವೇರಿಯಲ್ಲಿ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಆದಾಯ ತೆರಿಗೆ ಇಲಾಖೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ದಿನದ ಪ್ರತಿಭಟನೆಯನ್ನು ಪತ್ತಿನ ಮಹಾಮಂಡಳದ ನಿರ್ದೇಶಕರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನೆಯಲ್ಲಿ ಸುಮಾರು 300ಕ್ಕು ಹೆಚ್ಚು ಸಹಕಾರಿ ಮುಖಂಡರುಗಳು/ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರಿಗೆ ಮಹಾಮಂಡಳದ ಪರವಾಗಿ ಮನವಿ ಪತ್ರವನ್ನು ಹಾವೇರಿಯ ಅಪರ ಜಿಲ್ಲಾಧಿಕಾರಿಗಳಿಗೆ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಡಾ|| ಸಂಜಯ ಪಂ. ಹೊಸಮಠ ಮತ್ತು ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ರವರು ಸಹಕಾರ ಕ್ಷೇತ್ರಕ್ಕೆ ಮಾರಕವಾಗಿರುವ ಆದಾಯ ತೆರಿಗೆ ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಹಣಕಾಸು ಸಚಿವರಾದ ಶ್ರೀ ನಿರ್ಮಲ ಸೀತರಾಮನ್ ರವರಿಗೆ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ಆಗ್ರಹಿಸಿದರು.

ಅನಂತರ, ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ಪತ್ತಿನ ಸಹಕಾರ ಸಂಘಗಳು ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಸಮಸ್ಯೆಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಾಯಿತು.
ಈ ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲೆಯ ಹಿರಿಯ ಪ್ರಮುಖ ಸಹಕಾರಿ ಮುಖಂಡುರುಗಳಾದ ಶ್ರೀ ಬಸವರಾಜ್ ಬಿ. ಬೆಳವಾಡಿ, ಶ್ರೀ ಅಶೋಕ್ ಸಿ. ಪಾಟೀಲ, ಶ್ರೀ ಶಿವಾನಂದ ಕೆ. ತಮ್ಮಣ್ಣನವರ್, ಶ್ರೀ ಸುರೇಶ್ ಕಬ್ಬೂರು, ಶ್ರೀ ಎಸ್.ಎನ್. ಹಿರೇಮಠ, ಶ್ರೀ ಪರಮೇಶಪ್ಪ ಶಿವಣ್ಣವರ್, ಶ್ರೀಮತಿ ರತ್ನ ಬಿಮಕ್ಕನವರ್, ಶ್ರೀ ಶಂಕರೇಗೌಡ ಎಂ. ಅಗಸದಹಳ್ಳಿ ಮತ್ತು ಶ್ರೀ ಸಿ.ಎಸ್. ಮಠದ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

“ಧಾರವಾಡದಲ್ಲಿ ಸಹಕಾರಿಗಳ ಪ್ರತಿಭಟನೆ”

ಧಾರವಾಡ: ದಿನಾಂಕ: 10-01-2020ರಂದು ಧಾರವಾಡದಲ್ಲಿ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಆದಾಯ ತೆರಿಗೆ ಸಮಸ್ಯೆಗಳ ಕುರಿತು ಸಹಕಾರಿಗಳ ಪ್ರತಿಭಟನೆಯನ್ನು ನಡೆಸಲಾಯಿತು ಈ ಪತ್ರಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರುಗಳು ವಹಿಸಿದ್ದರು.

ಪ್ರತಿಭಟನೆಯಲ್ಲಿ ಸುಮಾರು 500ಕ್ಕು ಹೆಚ್ಚು ಸಹಕಾರಿ ಮುಖಂಡರುಗಳು/ಪ್ರತಿನಿಧಿಗಳು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು. ಮೊದಲಿಗೆ ಕೇಂದ್ರ ಹಣಕಾಸು ಸಚಿವರಿಗೆ ಮಹಾಮಂಡಳ ಹಾಗೂ ಸ್ಥಳೀಯ ಸಹಕಾರ ಸಂಘಗಳ ಪರವಾಗಿ ಮನವಿ ಪತ್ರವನ್ನು ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಗೆ ಮೆರವಣಿಗೆ ತೆರಳಿ ನಂತರ ಮನವಿ ಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರುಗಳಾದ ಡಾ|| ಸಂಜಯ ಪಂ. ಹೊಸಮಠ, ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ಶ್ರೀ ಉಮೆಶ ಶಿ. ಬಾಳಿ ಹಾಗೂ ಮಾಜಿ ನಿರ್ದೇಶಕರಾದ ಶ್ರೀ ಗುರುರಾಜ್ ಹುಣಸಿಮರದ ಹಾಗೂ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಹಿರಿಯ ಸಹಕಾರಿ ಪ್ರತಿನಿಧಿಗಳು ಭಾಗವಹಿಸಿದ್ದರು.

Back To Top