+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಬೆಳಗಾವಿ ವಿಭಾಗ ಮಟ್ಟದ ವ್ಯಾಪ್ತಿಗೆ ಒಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ನಿರ್ದೇಶಕರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ

ಬೆಳಗಾವಿ:-ದಿನಾಂಕ: 31-10-2018 ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ವತಿಯಿಂದ ಬೆಳಗಾವಿ ವಿಭಾಗ ಮಟ್ಟದ ವ್ಯಾಪ್ತಿಗೆ ಒಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ನಿರ್ದೇಶಕರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಾಗಾರದ ಉಧ್ಘಾಟನೆಯನ್ನು ಶ್ರೀ ಕೆ.ಎಲ್.ಶ್ರೀನಿವಾಸ, ಸಹಕಾರ ಸಂಘಗಳ ಉಪನಿಬಂಧಕರು. ಬೆಳಗಾವಿ ಜಿಲ್ಲೆ ಇವರು ನೆರವೇರಿಸಿದರು.

ಮುಖ್ಯಅತಿಥಿಗಳಾಗಿ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀ ಬಸವರಾಜ್ ಎಸ್ ಸುಲ್ತಾನ್ ಪುರಿ, ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಗುರುರಾಜ ಹುಣಸಿಮರದ. ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ಶೀ ಎಂ.ಜೆ.ನರೇಂದ್ರಕುಮಾರ, ಶ್ರೀ ಧರೇಪ್ಪ ಮಹದೇವ ಅಲಗೂರ, ಶ್ರೀ ಜಿ.ಮಲ್ಲಿಕಾರ್ಜುನಯ್ಯ, ಮತ್ತು ಶ್ರೀ ಕೆ.ನಾರಾಯಣರವರು, ಅತಿಥಿಗಳಾಗಿ ಶ್ರೀ ಬಸಗೌಡ ದುಂ ಪಾಟೀಲ, ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್, ಬೆಳಗಾವಿ ಜಿಲ್ಲೆ ಇವರು ಉಪಸ್ಥಿತರಿದ್ದರು.

ಸದರಿ ಕಾರ್ಯಾಗಾರದಲ್ಲಿ ವಿಷಯ ಉಪನ್ಯಾಸಕರುಗಳಾಗಿ ಶ್ರೀ ಹೆಚ್.ಎಸ್. ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ರವರು “ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಮತ್ತು ಚುನಾವಣಾ ನಿಯಮಗಳು” ಬಗ್ಗೆ ಉಪನ್ಯಾಸ ಮಾಡಿದರು. ಹಾಗೂ ಶ್ರೀ ಅನಿಲ್ ಭಾರಧ್ವಾಜ್ ಸನ್ನದು ಲೆಕ್ಕಪರಿಶೋಧಕರು “ಸಹಕಾರ ಸಂಘಗಳಲ್ಲಿ ಆದಾಯ ತೆರಿಗೆ ಮತ್ತು ಜಿಎಸ್.ಟಿ” ಯ ಕುರಿತು ಉಪನ್ಯಾಸ ನೀಡಿದರು. ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್. ಗುರುಪ್ರಸಾದ್ ರವರು ನಿರೂಪಣೆಮಾಡಿದರು ನಿರ್ದೇಶಕರಾದ ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ 600ಕ್ಕು ಹೆಚ್ಚಿನ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಹಾಜರಿದ್ದರು.

Back To Top