+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ: 17-01-2020 ರಂದು ಮಹಾಮಂಡಳದ ವತಿಯಿಂದ ಶಿಕಾರಿಪುರದಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಕ್ರಮ

ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಶಿಕ್ಷಣ – ತರಬೇತಿಯ ಪಾತ್ರ ಮಹತ್ವದ್ದು –  ಸಂಸದ ಬಿ.ವೈ. ರಾಘವೇಂದ್ರ

ಶಿಕಾರಿಪುರ: ದಿನಾಂಕ 17-01-2020ರಂದು ಸಾಂಸ್ಕøತಿಕ ಭವನ, ಎಸ್.ಎಸ್. ರಸ್ತೆ, ಶಿಕಾರಿಪುರ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಸಹಕಾರ ಸಂಘ ನಿ., ಶಿಕಾರಿಪುರ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ., ಶಿವಮೊಗ್ಗ, ಸಹಕಾರ ಇಲಾಖೆ ಶಿವಮೊಗ್ಗ, ಬನಶಂಕರಿ ಮಹಿಳಾ ವಿವಿಧೋದ್ದೇಶ ಗೃಹ ಕೈಗಾರಿಕಾ ಮಾರಾಟ ಸಹಕಾರ ಸಂಘ ನಿ., ಶಿಕಾರಿಪುರ, ಸಪ್ತಗಿರಿ ಮಹಿಳಾ ಗೃಹ ಕೈಗರಿಕಾ ಪತ್ತಿನ ಸಹಕಾರ ಸಂಘ ನಿ., ಶಿಕಾರಿಪುರ, ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ನಿ., ಶಿಕಾರಿಪುರ, ಬನಸಿರಿ ಮಹಿಳಾ ಪತ್ತಿನ ಸಹಕಾರ ಸಂಘ ನಿ., ಶಿಕಾರಿಪುರ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ವಿಭಾಗದ ವ್ಯಾಪ್ತಿಯ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಶ್ರೀ ಬಿ.ವೈ ರಾಘವೇಂದ್ರ, ಲೋಕಸಭಾ ಸದಸ್ಯರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಗಾರವನ್ನು ಉಧ್ಘಾಟಿಸಿದರು. ಮಹಾಮಂಡಳವು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಗಾರದಲ್ಲಿ ನೆರೆದಿದ್ದ ಸಹಕಾರಿ ಪ್ರತಿನಿಧಿಗಳಿಗೆ ಬದಲಾಗುತ್ತಿರುವ ಆದಾಯ ತೆರಿಗೆ ಕಾಯಿದೆಯ ಅಂಶಗಳನ್ನು ಹಾಗೂ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಬದಲಾಗುತ್ತಿರುವ ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿಮರ್ಶಿಸಿದರು. ಪತ್ತಿನ ಮಹಾಮಂಡಳದಿಂದ ಆದಾಯ ತೆರಿಗೆ ವಿನಾಯಿತಿ ಕುರಿತು ಕೇಂದ್ರ ಹಣಕಾಸು ಸಚಿವರಿಗೆ ಬರೆದಿರುವ ಪತ್ರವನ್ನು ಸಂಬಂಧಪಟ್ಟ ಇಲಾಖೆಗೆ ಪರಿಶೀಲಿಸಲು ಸಲ್ಲಿಸಲಾಗುವುದು ಎಂದ ಅವರು ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮುಂದಿನ ಲೋಕಸಭಾ ಸದನದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ.ಭೂಕಾಂತ ರವರು ವಹಿಸಿದ್ದರು. ಪತ್ತಿನ ಸಹಕಾರ ಸಂಘಗಳು ಬದಲಾಗುತ್ತಿರುವ ಕಾಯಿದೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಕ್ರಿಯಾಶೀಲರಾಗಿ ಮುಂದುವರೆದರೆ ಆರ್ಥಿಕ ಪ್ರಗತಿ ಸಾಧಿಸಲು ಸಾದ್ಯ. ಇಲ್ಲವಾದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಮಹಾಮಂಡಳದ ನಿರ್ದೇಶಕರಾದ ಶ್ರೀ ವಿ.ರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಾಮಂಡಳವು ಪತ್ತಿನ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳಲ್ಲಿ ಹೊಂದಾದ ಆದಾಯ ತೆರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮುಂದಿನ ದಿನದಲ್ಲಿ ಮಹಾಮಂಡಳದಿಂದ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು ನಂತರ ಮಹಾಮಂಡಳವು ಆದಾಯ ತೆರಿಗೆ ವಿನಾಯತಿ ಕುರಿತು ರಚಿಸಿರುವ ಮನವಿ ಪತ್ರವನ್ನು ಸಂಸದರಿಗೆ ಸಲ್ಲಿಸಿದರು.
ಕಾರ್ಯಾಗಾರದಲ್ಲಿ ವಿಶೇಷ ಆಹ್ವಾನಿತರುಗಳಾಗಿ ಆಗಮಿಸಿದ್ದ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಕಾಶೀನಾಥ್ ಬೆಲ್ದಾಳೆ ರವರು ಮಾತನಾಡಿ, ತರಬೇತಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್.ಎಂ. ಮಂಜುನಾಥಗೌಡ ರವರು ಮಾತನಾಡಿ ಪತ್ತಿನ ಮಹಾಮಂಡಳವು ರಾಜ್ಯ ವ್ಯಾಪ್ತಿ ಹಮ್ಮಿಕೊಳ್ಳುತ್ತಿರುವ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರಗಳ ಬಗ್ಗೆ ಪ್ರಶಂಶಿಸಿದರು
ಸಹಕಾರ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಆದ ಕಾರಣ, ಸಹಕಾರ ಸಂಘಗಳಿಗೆ ಆದಾಯ ತೆರಿಗೆ, ಜಿ.ಎಸ್.ಟಿ ಮತ್ತು ಟಿ.ಡಿ.ಎಸ್ ಅನ್ನು ರದ್ದುಗೊಳಿಸುವಂತೆ ಕೇಂದ್ರ ಸಂಸದರಿಗೆ ಸದನದಲ್ಲಿ ಮಾತನಾಡುವಂತೆ ಮನವಿ ಮಾಡಿದರು.
ಕಾರ್ಯಗಾರದಲ್ಲಿ ಸಹಕಾರಿ ಮುಖಂಡರುಗಳಾದ ಶ್ರೀ ವಿ.ರಾಜು, ಶ್ರೀ ಡಿ.ಆರ್.ನಾಗೇಶಪ್ಪ, ಶ್ರೀ ಎಂ.ಬಿ.ಚನ್ನವೀರಪ್ಪ, ಶ್ರೀಮತಿ ಶಾಂತಲಾ ಭೂಕಾಂತ, ಶ್ರೀಮತಿ ನಾಗರತ್ನ, ಶ್ರೀ ಹೆಚ್.ಯು.ಸುರೇಶ್ ವಾಟಗೋಡು, ಶ್ರೀ ಅಗಡಿ ಅಶೋಕ್, ಶ್ರೀಮತಿ ಮೀನಾಕ್ಷಿ ಬಸವರಾಜ್, ಶ್ರೀಮತಿ ಜ್ಯೋತಿ ರಾಜು, ಶ್ರೀಮತಿ ಅನುಸೂಯಮ್ಮ ಯೋಗೇಶ್ವರಯ್ಯ, ಶ್ರೀಮತಿ ವಿಶಾಲಾಕ್ಷಿ ಮಹೇಶ್ವರಪ್ಪ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸನ್ನದು ಲೆಕ್ಕಪರಿಶೋಧಕರಾದ ಶ್ರೀ ಅನಿಲ್ ಭಾರದ್ವಾಜ್, ಇವರಿಂದ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ಕುರಿತು ಹಾಗೂ ಶ್ರೀ ಹೆಚ್.ಎಸ್.ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ನಿ) ಇವರು ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಸಂಘಗಳಲ್ಲಿ ಚುನಾವಣಾ ನಿಯಮಾವಳಿಗಳ ಕುರಿತು ತರಬೇತಿ ನೀಡಿದರು.
ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್ ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪಿ. ಆಶಾಲತಾ ರವರು ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ ಭೂಕಾಂತ ರವರು ಗಣ್ಯರನ್ನು ಸ್ವಾಗತಿಸಿದರು. ಶ್ರೀ ತೀರ್ಥಪ್ರಸನ್ನ ರವರು ಕಾರ್ಯಕ್ರಮ ನಿರೂಪಿಸಿದರು. ನಂತರ ನಿರ್ದೇಶಕರಾದ ಶ್ರೀ ವಿ.ರಾಜು ರವರು ವಂದನಾರ್ಪಣೆ ಮಾಡಿದರು ಕಾರ್ಯಾಗಾರದಲ್ಲಿ ಸುಮಾರು 500ಕ್ಕು ಹೆಚ್ಚು ಸಹಕಾರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಗಾರದ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಮಹಾಮಂಡಳದ ವತಿಯಿಂದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ರವರಿಗೆ ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ವಿನಾಯತಿ ನೀಡಿಸುವಂತೆ ಮಹಾಮಂಡಳದ ಪರವಾಗಿ ಮನವಿ ಸಲ್ಲಿಸಲಾಯಿತು.

Back To Top