ದಿನಾಂಕ:28-06-2017 ಬುಧವಾರ ಮಧ್ಯಾಹ್ನ 3.00 ಘಂಟೆಗೆ ಪಿ.2 ಹಾಲ್, ಎಂ.ಚಿನ್ನಸ್ವಾಮಿ ಸ್ಟೇಡಿಯಂ, (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ) ಬೆಂಗಳೂರು-560001 ಇಲ್ಲಿ 2016-17ನೇ ಸಾಲಿನಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಹಾಗೂ ಇ-ಸ್ಟಾಂಪ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಆಯೋಜಿಸಲಾಗಿದ್ದು. ಸದರಿ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎಸ್.ಎಸ್. ಪಟ್ಟಣಶೆಟ್ಟಿ, ಭಾ.ಆ.ಸೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಮುಖ್ಯ ಅತಿಥಿಗಳಾಗಿ ಶ್ರೀ ರಾಮಚಂದ್ರ, ಉಪ ನೊಂದಣಿ ಪರಿವೀಕ್ಷಕರು ಮತ್ತು ಉಪ ಮುದ್ರಾಂಕ ಆಯುಕ್ತರು, ಕರ್ನಾಟಕ ಸರ್ಕಾರ, ಬೆಂಗಳೂರು, ಶ್ರೀ ಎಂ. ರಾಘವೇಂದ್ರ ಸ್ವಾಮಿ, ಪ್ರಾದೇಶಿಕ ವ್ಯವಸ್ಥಾಪಕರು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಬೆಂಗಳೂರು ಮತ್ತು ಶ್ರೀ ಎಂ.ಡಿ. ನರಸಿಂಹಮೂರ್ತಿ, ಕೆ.ಸಿ.ಎಸ್, ಸಹಕಾರ ಸಂಘಗಳ ಜಂಟಿ ನಿಬಂಧಕರು, (ಪಟ್ಟಣ ಬ್ಯಾಂಕುಗಳ ವಿಭಾಗ) ಬೆಂಗಳೂರು ಅರವರು ಭಾಗವಹಿಸಿದ್ದು. ಶ್ರೀ ಸಿ.ಎಂ. ಮಾರೇಗೌಡ ರವರು ಅಧ್ಯಕ್ಷತೆವಹಿಸಿದ್ದರು