ಶ್ರೀ ಎಸ್.ಎನ್.ಅರುಣ್ಕುಮಾರ್ ಕೆ.ಸಿ.ಎಸ್. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ನಂ.32, 3ನೇ ಮಹಡಿ, ಡಿ/ದೇವರಾಜ ಅರಸ್ ರಸ್ತೆ, (ರೇಸ್ಕೋರ್ಸ್ ರಸ್ತೆ) ಬೆಂಗಳೂರು ರವರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಕ್ಕೆ ಕಟ್ಟಡ ದೇಣಿಗೆಯಾಗಿ ರೂ.25,00,000/- (ಇಪ್ಪತ್ತೈದು ಲಕ್ಷ)ಗಳ ಚೆಕ್ಕನ್ನು ಮಹಾಮಂಡಳ ಅಧ್ಯಕ್ಷರಾದ ಶ್ರೀಮತಿ ಕೆ.ಲಲಿತ ಜಿ.ಟಿ.ದೇವೇಗೌಡರವರಿಗೆ ನೀಡಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಶ್ರೀಮತಿ ಆಶಾಲತಾ ಪಿ. ಉಪಸ್ಥಿತರಿದ್ದರು.