+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ: 23-11-2019 ರಂದು ಶಿರಸಿಯಲ್ಲಿ ಮಹಾಮಂಡಳದ ವತಿಯಿಂದ ಬೆಳಗಾವಿ ವಿಭಾಗದ ವ್ಯಾಪ್ತಿಗೊಳಪಡುವ ಎಲ್ಲಾ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ

ಪೇಜ್ ನಂ-11 ಮತ್ತು 12
ಬದಲಾಗುತ್ತಿರುವ ಆರ್ಥಿಕ ಪರಿಸ್ಥಿಯಲ್ಲಿ ಪತ್ತಿನ ಸಹಕಾರ ಸಂಘಗಳು ಹೆಚ್ಚು ಕ್ರಿಯಾಶೀಲರಾಗಬೇಕು
– ಡಾ. ಬಿ.ಡಿ.ಭೂಕಾಂತ

ಉ.ಕ: ದಿನಾಂಕ 23-11-2019ರಂದು ಟಿ.ಎಂ.ಎಸ್. ಸಭಾ ಭವನ, ಟಿ.ಎಂ.ಎಸ್ ಆಫೀಸ್ ಎದುರು, ಎನ್.ಎಂ ಯಾರ್ಡ್, ಶಿರಸಿ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಬೆಳಗಾವಿ ವಿಭಾಗದ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಪತ್ತಿನ ಸಹಕಾರ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ.ಭೂಕಾಂತ ರವರು ಉಧ್ಘಾಟಿಸಿ ಕಾರ್ಯಗಾರದಲ್ಲಿ ನೆರೆದಿದ್ದ ಸಹಕಾರಿ ಪ್ರತಿನಿಧಿಗಳಿಗೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಂದುವರೆದು ಮಾತನಾಡಿ ಬದಲಾಗುತ್ತಿರುವ ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ ಪತ್ತಿನ ಸಹಕಾರ ಸಂಘಗಳು ಹೆಚ್ಚು ಕ್ರಿಯಾಶೀಲರಾಗಿ ಮುಂದುವರೆದರೆ ಮಾತ್ರ ಸಂಘಗಳು ಆರ್ಥಿಕ ಪ್ರಗತಿ ಸಾಧಿಸಲು ಸಾದ್ಯ ಇಲ್ಲವಾದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಪತ್ತಿನ ಸಹಕಾರ ಮಹಾಮಂಡಳವು ತನ್ನದೇ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಪ್ರಯತ್ನ/ಯೋಜನೆಯನ್ನು ಹಮ್ಮಿಕೊಂಡಿದ್ದು ಎಲ್ಲಾ ಸಹಕಾರಿ ಸಂಸ್ಥೆಗಳು/ಸಹಕಾರಿಗಳು ಮಹಾಮಂಡಳದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

ಶ್ರೀ ಜಿ.ಟಿ. ಹೆಗಡೆ ತಟ್ಟಿಸರ ಸಹಕಾರ ರತ್ನ ಪುರಸ್ಕøತರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ, ನಿರ್ದೇಶಕರು ಇವರು ಕಾರ್ಯಗಾರದ ಉಧ್ಘಾಟಿಸಿ ಮಹಾಮಂಡಳವು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಕಾರ್ಯಗಾರದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರುಗಳಾದ ಶ್ರೀ ಡಾ|| ಸಂಜಯ ಪಂ. ಹೊಸಮಠ, ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ಮತ್ತು ಶ್ರೀ ಉಮೇಶ ಶಿ. ಬಾಳಿ ರವರು ಹಾಜರಿದ್ದರು.

ಅತಿಥಿಗಳಾಗಿ ಶ್ರೀ ವಿ.ಎನ್.ಭಟ್ (ಅಳ್ಳಂಕಿ), ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್., ಉತ್ತರ ಕನ್ನಡ ಜಿಲ್ಲೆ ಮತ್ತು ಶ್ರೀ ಎನ್.ಎನ್.ಹೆಗಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿರಸಿ ಉಪವಿಭಾಗ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಬಿ.ವಿ.ರವೀಂದ್ರನಾಥ್, (ಸಿ.ಎ) ಇವರಿಂದ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ಕುರಿತು ಹಾಗೂ ಶ್ರೀ ಎಸ್.ಜೆ.ಜೋಷಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿ.,) ಇವರಿಂದ ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಸಂಘಗಳಲ್ಲಿ ಚುನಾವಣಾ ನಿಯಮಾವಳಿಗಳ ಕುರಿತು, ಹಾಗೂ ಇ-ಸ್ಟಾಂಪಿಂಗ್ ತಜ್ಞರಿಂದ ಇ-ಸ್ಟಾಂಪಿಂಗ್ ಕುರಿತು ತರಬೇತಿ ನೀಡಿದರು. ವಿಘ್ನರಾಜ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಶಿರಸಿ ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀಯುತ ಸಂಭಾಳ ರವರು ಗಣ್ಯರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ನಿರ್ದೇಶಕರಾದ ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ವಂದನಾರ್ಪಣೆ ಮಾಡಿದರು ಕಾರ್ಯಾಗಾರದಲ್ಲಿ ಸುಮಾರು 180ಕ್ಕು ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಕಾರ್ಯಗಾರದ ಉಪನ್ಯಾಸವನ್ನು ಆಲಿಸಿ ಕಾರ್ಯಾಗಾರದ ಪ್ರಮುಖ್ಯತೆ ಮೌಲ್ಯಗಳನ್ನು ಪಡೆದರು.

Back To Top