+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ವಿಜಯಪುರ:- ದಿನಾಂಕ: 25-07-2018 ರಂದು ಮಹಾಮಂಡಳದ ವತಿಯಿಂದ ಕಲಬುರ್ಗಿ ವಿಭಾಗ ವ್ಯಾಪ್ತಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಡೆದ ಶಿಕ್ಷಣ ತರಬೇತಿ ಕಾರ್ಯಾಗಾರ

ದಿನಾಂಕ: 25-07-2018 ರಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಕಲಬುರ್ಗಿ ವಿಭಾಗ ವ್ಯಾಪ್ತಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಮರ್ಚೆಂಟ್ಸ್ ಅಸೋಸಿಯೇಷನ್, ಮಂಗಲ ಕಾರ್ಯಾಲಯ, ಎ.ಪಿ.ಎಂ.ಸಿ. ಯಾರ್ಡ್, ವಿಜಯಪುರ ಇಲ್ಲಿ ಜರುಗಿದ್ದು,
ಸದರಿ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ಎಂ.ಜಿ. ಪಾಟೀಲ್, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ವಿಜಯಪುರ ಇವರು ನೆರವೇರಿಸಿದರು, ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ.ಮಾರೇಗೌಡ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಾಮಂಡಳದ ಉಪಾಧ್ಯಕ್ಷರಾದ ಡಾ|| ಸಂಜಯ್ ಪಿ. ಹೊಸಮಠ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀ ಶಿವನಗೌಡ ಎಸ್. ಬಿರಾದಾರ್, ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಆಕಾಶ ಪಾಟೀಲ, ಶ್ರೀ ಎಂ.ಜೆ. ನರೇಂದ್ರ ಕುಮಾರ ಮತ್ತು ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ರವರು ಭಾಗವಹಿಸಿದ್ದರು.
ಅತಿಥಿಗಳಾಗಿ ಶ್ರೀ ಸೀಮಂತ ಇಂಡಿ, ಉಪಾಧ್ಯಕ್ಷರು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಒಕ್ಕೂಟ, ವಿಜಯಪುರ
ವಿಶೇಷ ಆಹ್ವಾನಿತರಾಗಿ ಶ್ರೀ ಪಿ.ಬಿ. ಕಾಳಗಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ವಿಜಯಪುರ ರವರು ಹಾಜರಿದ್ದರು,
ಕಾರ್ಯಾಗಾರದಲ್ಲಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿಗಾಗಿ ವಿಷಯ ತಜ್ಞರುಗಳಾದ ಶ್ರೀ ಹೆಚ್.ಎಸ್. ನಾಗರಾಜಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ಇವರಿಂದ “ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಸಹಕಾರ ಸಂಘಗಳ ಚುನಾವಣಾ ನಿಯಮಾವಳಿಗಳ ಬಗ್ಗೆ ಹಾಗೂ ಶ್ರೀ ಅನಿಲ್ ಭಾರದ್ವಾಜ್, ಸಿ.ಎ ಇವರಿಂದ “ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ವಿಷಯಗಳ ಕುರಿತು ಹಾಗೂ ಶ್ರೀ ಸುಧಾಕರ್, ಇ-ಸ್ಟಾಂಪಿಂಗ್ ನೋಡಲ್ ಅಧಿಕಾರಿ ಇವರಿಂದ ಇ-ಸ್ಟಾಂಪಿಂಗ್ ಕುರಿತು ಉಪನ್ಯಾಸ ನೀಡಲಾಯಿತು.

Back To Top