+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಸದಸ್ಯರಿಗೆ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಗಾರ

ದಿನಾಂಕ: 25.10.2017 ನೇ ಬುಧವಾರ ದಂದು ಹೋಟೆಲ್ ಸಾಯಿಧಾಮ ಸಭಾಂಗಣ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ, ಕೋಲಾರ ಇಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಗಾರ.

ದಿನಾಂಕ: 25.10.2017 ನೇ ಬುಧವಾರ ದಂದು ಹೋಟೆಲ್ ಸಾಯಿಧಾಮ ಸಭಾಂಗಣ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ, ಕೋಲಾರ ಇಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿತು.್ತ
ಬ್ಯಾಲಹಳ್ಳಿ ಶ್ರೀ ಗೋವಿಂದೇಗೌಡ, ಅಧ್ಯಕ್ಷರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ., ಕೋಲಾರ ರವರು ಕಾರ್ಯಾಗಾರದ ಉದ್ಘಾಟನೆ ಮಾಡಿ ತರಬೇತಿಯ ಅಗತ್ಯತೆಯನ್ನು ಹಾಜರಿದ್ದ ಪದಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟರರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ ಮಾರೇಗೌಡ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕರಾದ ಶ್ರೀ ವಿ.ರಾಜು, ಶ್ರೀ ಎಂ.ಜೆ. ನರೇಂದ್ರಕುಮಾರ ಮತ್ತು ಶ್ರೀ ಜಿ.ಮಲ್ಲಿಕಾರ್ಜುನಯ್ಯ ಹಾಗೂ ಅತಿಥಿಗಳಾಗಿ ಶ್ರೀ ಕೆ.ಎನ್.ನಂಜುಂಡೇಗೌಡ, ಸಹಕಾರ ಸಂಘಗಳ ಉಪನಿಬಂಧಕರು, ಕೋಲಾರ ಜಿಲ್ಲೆ ಹಾಗೂ ಶ್ರೀ ಟಿ.ವಿ.ನಾಗರಾಜುಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೋಲಾರ ಉಪವಿಭಾಗ ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ಮಂಜುನಾಥ್, ಅಧ್ಯಕ್ಷರು, ಸಮೃದ್ದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಯಲಹಂಕ ನ್ಯೂಟೌನ್, ಬೆಂಗಳೂರು, ಶ್ರೀ ಎಸ್.ಆರ್.ರುದ್ರಸ್ವಾಮಿ, ಅಧ್ಯಕ್ಷರು, ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕೋಲಾರ ಮತ್ತು ಶ್ರೀಮತಿ ಸುಕನ್ಯಾ, ಅಧ್ಯಕ್ಷರು, ಕೋಲಾರಮ್ಮ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಕೋಲಾರ ರವರು ಭಾಗವಹಿಸಿದ್ದರು,

ಶ್ರೀ ವಿ.ರಾಜು ರವರು ಗಣ್ಯರನ್ನು ಸ್ವಾಗತಿಸಿದರು, ಶ್ರೀ ಕೆ.ಎಸ್.ಗುರುಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು ನಂತರ ಶ್ರೀ ಜಿ.ಮಲ್ಲಿಕಾರ್ಜುನಯ್ಯ ವಂದಿಸಿದರು.

ಈ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಬಿ.ಎ.ಮಹದೇವಪ್ಪ, ನಿವೃತ್ತ ಅಪರ ನಿಬಂಧಕರು, ಇವರಿಂದ “ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಪತ್ತಿನ ಸಹಕಾರ ಸಂಘಗಳಲ್ಲಿ ನಗದು ರಹಿತ ವ್ಯವಹಾರದ ಅಗತ್ಯತೆ” ಕುರಿತು ಉಪನ್ಯಾಸ ಮಧ್ಯಾಹ್ನದ ಅವದಿಯಲ್ಲಿ ಇ-ಸ್ಟಾಂಪಿಂಗ್ ತಜ್ಞರಿಂದ “ಇ-ಸ್ಟಾಂಪಿಂಗ್ ಕುರಿತು ತರಬೇತಿ” ಹಾಗೂ ಶ್ರೀ ಶಶಿಧರ್ ಎಲೆ, ನಿವೃತ್ತ ಅಪರ ನಿಬಂಧಕರು, ಇವರಿಂದ “ಆಡಳಿತಮಂಡಳಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ” ಕುರಿತು ಉಪನ್ಯಾಸ ನೀಡಿದರು.

ಸದರಿ ಕಾರ್ಯಾಗಾರಕ್ಕೆ ಮಹಾಮಂಡಳದಲ್ಲಿ ಸದಸ್ಯತ್ವ ಪಡೆದಿರುವ 57 ಪ್ರತಿನಿಧಿಗಳು ನೋಂದಣಿಯಾಗದಿರುವ ಸಂಘಗಳಿಂದ 33 ಪ್ರತಿನಿಧಿಗಳು ಸೇರಿ ಈ ಕಾರ್ಯಾಗಾರದಲ್ಲಿ ಅಂದಾಜು 90 ಪ್ರತಿನಿಧಿಗಳು ಹಾಜರಿದ್ದು ಹಾಜರಿದ್ದ ಎಲ್ಲಾ ಪ್ರತಿನಿಧಿಗಳಿಗೆ ಮಹಾಮಂಡಳದ ವತಿಯಿಂದ ತರಬೇತಿ ಕಿಟ್ಟನ್ನು ನೀಡಲಾಯಿತು. ಒಟ್ಟಾರೆ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ತರಬೇತಿ ಕಾರ್ಯಾಗಾರದ ಬಗ್ಗೆ ಭಾಗವಹಿಸಿದ್ದ ಪ್ರತಿನಿಧಿಗಳು ಮೆಚ್ಚಿಗೆ ವ್ಯಕ್ತಪಡಿಸಿದರು.

Back To Top