+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಶಿರಡಿಯಲ್ಲಿ ಅಂತರರಾಷ್ಟ್ರೀಯ ಸಹಕಾರ ಸಮ್ಮೇಳನ – ವಿಚಾರ ಗೋಷ್ಠಿ

ಶಿರಡಿ: ದಿನಾಂಕ:15-02-2020 ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಹಾಗೂ ಮಹಾರಾಷ್ಟ್ರ ಸರ್ಕಾರ ಹಾಗೂ ಸಹಕಾರ ಇಲಾಖೆಯ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಸಹಕಾರ ವಿಚಾರ ಗೊಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ವಿಚಾರ ಗೊಷ್ಠಿಯಲ್ಲಿ ಅಂತರರಾಷ್ಟ್ರೀಯ ಸಹಕಾರಿ ಕಾನೂನು, ಪತ್ತಿನ ಸಹಕಾರ ಸಂಘಗಳ ಕಾಯ್ದೆ ಅಂಶಗಳು ಮತ್ತು ಆದಾಯ ತೆರಿಗೆ ನೀತಿಗಳ ಬಗ್ಗೆ ಚರ್ಚಿಸಲಾಯಿತು.

ಏಷ್ಯನ್ ಸಾಲ ಒಕ್ಕೂಟಗಳ ಒಕ್ಕೂಟದ ಸಂಘ ನಿ., ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲೆನಿತ ಸ್ಯಾನ್‍ರಾಕ್ ಮತ್ತು ಶ್ರೀ ರಂಜಿತ್ ಹೆಚ್ ಮತ್ತು ಶ್ರೀ ಪಾರಿತೋಷ್ ಪಾಡ್ಯಲೆ, ಅಧ್ಯಕ್ಷರು, ನೇಪಾಳ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ನೇಪಾಳ, ಶ್ರೀ ಪ್ರಕಾಶ್ ಪೊಖರೇಲ್, ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ, ನೆಪಾಳ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ.ಭೂಕಾಂತ, ನಿರ್ದೇಶಕರುಗಳಾದ ಡಾ|| ಸಂಜಯ ಪಂ. ಹೊಸಮಠ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಡಿ.ಚನ್ನಯ್ಯ, ಶ್ರೀ ಕೆ.ಕೃಷ್ಣಮೂರ್ತಿ, ಶ್ರೀ ಕೆ.ಕೆ.ಮಹೇಂದ್ರ ಪ್ರಸಾದ್‍ಗೌಡ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಶೇಖರಗೌಡ ಮಾಲಿ ಪಾಟೀಲ, ಶ್ರೀ ಹೆಚ್.ಟಿ.ನಾಗೇಶ್, ಶ್ರೀ ಉಮೇಶ ಶಿ. ಬಾಳಿ, ಶ್ರೀ ರವೀಂದ್ರ ಪ್ರ. ಕಲಬುರ್ಗಿ ಮತ್ತು ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್ ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪಿ. ಆಶಾಲತಾ ಮತ್ತು ಡಾ. ಪಿ.ಎಲ್.ಖಾಂಡಗಲೆ, ಸಹಕಾರ ಸಂಘಗಳ ಅಪರ ನಿಬಂಧಕರು ಮತ್ತು ಶ್ರೀ ಮಿಲಿಂದ್ ಸೋಬಲೆ, ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಇಲಾಖೆ ಮಹಾರಾಷ್ಟ್ರ ರವರುಗಳು ಭಾಗವಹಿಸಿದ್ದರು.

ಈ ಒಂದು ವಿಚಾರ ಗೋಷ್ಠಿಯಲ್ಲಿ ವಿವಿಧ ರಾಜ್ಯಗಳ ಸಹಕಾರ ಕ್ಷೇತ್ರಗಳ ಬೆಳವಣಿಗಳ ಕುರಿತು ಪ್ರಭಂದಗಳನ್ನು ಮಂಡಿಸಿದರು ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಶ್ರೀಮತಿ ಅಂಜಲಿ ಪಾಟೀಲ್ ರವರು ಮತ್ತು ಏಷ್ಯನ್ ಸಾಲ ಒಕ್ಕೂಟಗಳ ಒಕ್ಕೂಟದ ಸಂಘ ನಿ., ಎಲೆನಿತ ಸ್ಯಾನ್‍ರಾಕ್ ಮತ್ತು ಶ್ರೀ ರಂಜಿತ್ ಹೆಚ್ ರವರು, ನೆಪಾಳ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಶ್ರೀ ಪ್ರಕಾಶ್ ಪೊಖರೇಲ್ ರವರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಡಾ|| ಸಂಜಯ ಪಂ. ಹೊಸಮಠ ಮತ್ತು ಡಾ. ಬಿ.ಡಿ.ಭೂಕಾಂತ ರವರು

ಮಾತನಾಡಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಅಂಶಗಳು, ಆದಾಯ ತೆರಿಗೆ ಇಲಾಖೆ ಯಿಂದ ಸಹಕಾರ ಸಂಘಗಳಿಗೆ ಆಗುತ್ತಿರುವ ತೊಂದರೆಗಳನ್ನು ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವತಿಯಿಂದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿ ಮತ್ತು ಡಾ. ಪಿ.ಎಲ್.ಖಾಂಡಗಲೆ, ಸಹಕಾರ ಸಂಘಗಳ ಅಪರ ನಿಬಂಧಕರು, ಸಹಕಾರ ಇಲಾಖೆ ಮಹಾರಾಷ್ಟ್ರ ರವರುಗಳು ಪ್ರಸ್ತುತ ಸಹಕಾರ ಕ್ಷೇತ್ರಗಳ ಬೆಳವಣಿಗೆ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಕಿರು ಚಿತ್ರ ಮತ್ತು ಮಾಹಿತಿಗಳನ್ನು ಪ್ರದರ್ಶಿಸಿದರು.

ಈ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಓಂಪ್ರಕಾಶ್ ದಾದಪ್ಪ ಅಲಿಯಾಸ್ ಕಾಕ ಕೋಯಟೆ ರವರು ವಹಿಸಿದ್ದು ಕಾರ್ಯಕ್ರಮದ ಪ್ರಾರಂಭಕ್ಕು ಮುನ್ನ ಎಲೆನಿತ ಸ್ಯಾನ್‍ರಾಕ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಏಷ್ಯನ್ ಸಾಲ ಒಕ್ಕೂಟಗಳ ಒಕ್ಕೂಟದ ಸಂಘ ನಿ., ಇವರು ಸಹಕಾರ ದ್ವಜಾರೋಹಣ ಮಾಡಿದರು ಶ್ರೀಮತಿ ಸುರೇಖಾ ಲಾವಂಡೆ ರವರು ಸ್ವಾಗತ ಬಯಸಿದರು. ಈ ಒಂದು ವಿಚಾರ ಗೋಷ್ಠಿಯಲ್ಲಿ ಅಲವು ರಾಜ್ಯ ಮತ್ತು ವಿದೇಶಗಳ ಸಹಕಾರಿ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಿಗೆ ಸನ್ಮಾನ ಅಭಿನಂದನೆ ಸಲ್ಲಿಕೆ:

ಅಂತರರಾಷ್ಟ್ರೀಯ ಸಹಕಾರ ವಿಚಾರ ಗೋಷ್ಠಿಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಓಂಪ್ರಕಾಶ್ ದಾದಪ್ಪ ಅಲಿಯಾಸ್ ಕಾಕ ಕೋಯಟೆ ರವರನ್ನು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

Back To Top