ಅಂತರರಾಜ್ಯ ಸಹಕಾರಿಗಳ ಸಮಾಲೋಚನೆ – ವಿಚಾರ ವಿನಿಮಯ
ಶಿರಡಿ: ದಿನಾಂಕ: 14-02-2020 ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಆಡಳಿತಮಂಡಳಿ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಎರಡು ರಾಜ್ಯಗಳ ಪತ್ತಿನ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಪತ್ತಿನ ಕ್ಷೇತ್ರಗಳ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿಯಮಿತದ ಅಧ್ಯಕ್ಷರಾದ ಶ್ರೀ ಬಿ.ಹೆಚ್.ಕೃಷ್ಣಾರೆಡ್ಡಿ ರವರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಆಡಳಿತಮಂಡಳಿ ನಿರ್ದೇಶಕರುಗಳಾದ ಡಾ|| ಸಂಜಯ ಪಂ. ಹೊಸಮಠ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಡಿ.ಚನ್ನಯ್ಯ, ಶ್ರೀ ಕೆ.ಕೃಷ್ಣಮೂರ್ತಿ, ಶ್ರೀ ಕೆ.ಕೆ.ಮಹೇಂದ್ರ ಪ್ರಸಾದ್ಗೌಡ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಶೇಖರಗೌಡ ಮಾಲಿ ಪಾಟೀಲ, ಶ್ರೀ ಹೆಚ್.ಟಿ.ನಾಗೇಶ್, ಶ್ರೀ ಉಮೇಶ ಶಿ. ಬಾಳಿ, ಶ್ರೀ ರವೀಂದ್ರ ಪ್ರ. ಕಲಬುರ್ಗಿ ಮತ್ತು ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್ ರವರು ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಓಂಪ್ರಕಾಶ್ ದಾದಪ್ಪ ಅಲಿಯಾಸ್ ಕಾಕ ಕೋಯಟೆ ರವರು ವಹಿಸಿದ್ದರು. ಈ ಸಭೆಯಲ್ಲಿ ನೇಪಾಳ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಪಾರಿತೋಷ್ ಪಾಡ್ಯಲೆ ಮತ್ತು ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ್ ಪೊಖರೇಲ್ ರವರು ಉಪಸ್ಥಿತರಿದ್ದರು.