ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರು, ಭಾರತ್ ವಿದ್ಯಾಸಂಸ್ಥೆ ಹಾಗೂ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಸಹಕಾರಿ ಧುರೀಣ, ಸಹಕಾರ ರತ್ನ, ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಾದ ಶ್ರೀ ಬಿ.ಎಲ್. ಲಕ್ಕೇಗೌಡರವರು ದಿನಾಂಕ 29-11-2021ರಂದು ದೈವಾಧೀನರಾಗಿರುತ್ತಾರೆ. ಇವರಿಗೆ ಭಾವಪೂರ್ಣ ನಮನಗಳು. ಇವರ ಗೌರವಾರ್ಥ ಮಹಾಮಂಡಳದ ಕಚೇರಿಗೆ ರಜೆಯನ್ನು ಘೋಷಿಸಲಾಗಿದೆ.